ಕಾರುಣ್ಯವಾರಿಧಿ ಹರಿಯ ಕಾರುಣ್ಯ ಪಡೆದವಗೆ
ಇಳೆಯೊಳಗೆ ಅವತರಿಸಿ ಯತಿಯಾಶ್ರಮ ಪಡೆದು
ಬಲುಧನ್ಯ ಮಾನ್ಯ ನೀನಾದೆ ಗುರುವೇ |
ಹಲಧರಾನುಜ ಕೃಷ್ಣ ನರಸಿಂಹನುಪಾಸಕನೇ
ಒಲವಿನಿಂದಲಿ ಕೊನೆಗೆ ನೆಲೆಸಿದೆಯೋ ಮಾನವಿಯಲಿ||
ಗುಪ್ತವಾಗಿರುತ ನೀ ಗುಪ್ತಸಾಧನ ನಡೆಸಿ
ಆಪ್ತನಾದೆಯೋ ಹರಿಗೆ ಶ್ರೇಷ್ಠಸಾಧಕನೇ |
ತೃಪ್ತಿಯಲಿ ಪಾಮರರ ಪೋಷಿಪೆಯೋ ನೀ ತಂದೆ
ಸಕ್ತವಾಗಲಿ ಮನಸು ನಿನ್ನಲ್ಲಿ ಎನಗೆ ||
ಭಕ್ತಿ ಸುಜ್ಞಾನವೈರಾಗ್ಯದ ನಿಧಿ ನಿನ್ನ
ಯುಕ್ತಿಯಿಂದಲಿ ಭಜಿಪ ಮಾರ್ಗವರಿಯೇ ।
ಶಕ್ತಿ ಭಕ್ತಿಯ ನೀಡೋ ಮನದಲ್ಲಿ ನೀನೆಲಸಿ
ಮತ್ತೆ ಬೇಡುವೆ ಪಂಢರಿನಾಥವಿಠಲ ದಾಸಾ ||