ಆ ರಘುವೀರಕರೋತ್ಥರ ಕೋದಂಡ
ಶ್ರೀರಾಮನ ಪದ ವಾರಿಜ ಮಧುಪರ
ರಾಮಾರ್ಯರ ಸುತರೆನಿಸಿ ದ್ವಿಜತ್ವದ ನೇಮಗೈದು ಮೇಲಾಗಿ
ಸತ್ಕಾಮಿನಿಯ ಮದುವೆಯಾಗಿ ಭೂಮೀಶನ ಸೈನ್ಯದಲಿದ್ದು
ಕಾರ್ಯವ ತಾಮಸವಿಲ್ಲದೇ ನಡಿಸಿ ಅಧಿಕಾರಿಯ ಪ್ರೀತಿಯ ಪಡಿಸಿ |
ಶ್ರೀಮನೋಹರನು ಮಹಿಮೆ ತೋರಲು ವಿರಾಮವ ಗೊಳಿಸಿದ ರುದ್ಯೋಗವಗಡ II೧II
ವರಕೂಡಲಿ ರಘುವೀರತೀರ್ಥರನು ಶರಣು ಪೊಂದುತಲಿ ಸಾಗಿ |
ಯತ್ಯಾಶ್ರಮ ತಳೆದು ಚೆನ್ನಾಗಿ |
ಹರಿಪರನೆಂದರುಹುತ ಶಾಸ್ತ್ರವ ಭೂಸುರರಿಗುಣಿಸಿ |
ಮೃಷ್ಟಾನ್ನ ಗೈದರು ಸರ್ವಸ್ವವ ದಾನ ಧರೆಯೊಳು ಕಾರ್ಪರ ನರಹರಿಯ ಚರಣ ಸರಸಿಜ ಸೇವಿಸಿ ಪಡೆದರನುಗ್ರಹ ||೨||
ದೇಶ ದೇಶ ಸಂಚರಿಸುತ ಭಕುತರ ಆಸೆಯ ಪೂರ್ತಿಸಿದವರು
ಜಗದೀಶನ ಪ್ರೀತಿ ವಿಷಯರು ಲೇಸು ಜಗನ್ನಾಥದಾಸರ ಕಾಣುತ
ತೋಷದಿ ನಲಿದಾಡಿದರು ಪರವಶದಿ ಭಜನೆ ಮಾಡಿದರು
ಶ್ರೀಶವೇಂಕಟನ ಚರಣ ಸೇರುತಲಿ ಭಾಸುರ ಮಾನವಿ ಪುರದಿ ಹೊರಗಿರುವ ||೩||