ಸಾರಿದವರಘ ದೂರ ಮಾಡುವ ನಮ್ಮ ಧೀರ

ಶ್ರೀನಾರಾಯಣ ತೀರ್ಥರ ನಾಮವ


ಬಂಡಿಲಿ ಜನಿಸಿದರು ಇವರು ಕೋದಂಡರಾಮರ ಪ್ರಿಯರು|

ಕಂಡು ಇವರ ಪಾದ ಕೊಂಡಾಡಿದೊಡೆ

ಕುಂಡಲಿಶಯನ ಪಾಂಡುರಂಗ ತಾನೊಲಿವ


ಭೋಗಿಶಯನನ ಪಾದವ ಘನ್ನಯೋಗದಿ ಧ್ಯಾನಿಸುವ|

ರೋಗಹರರು ಕೃಪಾಸಾಗರರಿವರು ಶ್ರೀ-

ರಘುವೀರತೀರ್ಥರ ಕರಕಮಲ ಸಂಜಾತರು


ಘನ್ನಮಹಿಮರಿವರು ಚೆನ್ನಾಗಿ ತಮ್ಮ ದಾಸರ ಸಲಹುವರು |

ಮಾನಿತಮಾನವಿಕಾನನದೊಳು ರಂಗನಾಥನ

ಧ್ಯಾನದಿ ಕುಳಿತ ಸನ್ಮೌನಿ ಮುನಿಂದ್ರರ ನಾಮ