ಭೋಗಭಾಗ್ಯವನು ತ್ಯಾಗ ಮಾಡಿ ವಿ-
ರಾಗಿಯಾದ ಮಹಾ ಯೋಗಿವರರ ಪದ ||
ಪಂಢರಿದಯದಿಂದ ಅಂದು ಬಂಡಿಲಿ ಜನಿಸುತಲಿ
ದಂಡನಾಯಕರಾಗಿ ಮೆರೆದು ಕಡೆಗೆ ಕೋ -
ದಂಡಧರನ ಪಾದ ಕಂಡರು ಹರುಷದಿ ||
ರಾಘವನಾಜ್ಞೆಯಲಿ ರಘುವೀರತೀರ್ಥರಡಿಗೆ ಬಾಗಿ
ಸಾಗರಶಯನನ ಯೋಗದಿ ಒಲಿಸಿ
ಜಗನ್ನಾಥದಾಸರ ಪ್ರಿಯರೆನಿಸಿದವರು ||
ಸಾರಿ ಭಜಿಪ ಜನರ ದುರಿತವ ದೂರ ಮಾಡಿ ಪೊರೆವ
ಭೂರಮಣನ ಪಾದಪಾರಾಯಣರಾದ
ನಾರಾಯಣತೀರ್ಥರೆಂಬಾಪಾರ ಮಹಿಮರ ||
ದರುಶನ ಭಾಗ್ಯವನು ಮಿಗೆ ಪರಿವಾರಕೆ ನೀಡುತಲಿ
ಕರುಣವ ತೋರುತ ಧರಣಿಯೊಳಗೆ
ವರ ಕರ್ಣರೆಂದಿಪರ ಚರಣ ಯುಗ್ಮವ ||
ಜಾಣರಂಗನ ಪದವ ತನುಮನಧನದಿಂದರ್ಚಿಸುತ
ಕ್ಷೋಣಿಬುಧರಿಗೆ ಮೃಷ್ಟಾನ್ನನೀಡಿ ಮಹಾ-
ದಾನಿ ಎನಿಸಿದಂಥ ಮಾನವಿನಿಲಯರ ||
IIಅಸ್ಮದ್ಗುರ್ವ೦ತರ್ಗತಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು||